ಮೀರಾ ದೇವಿ
ರಾಜ್ಯ : ಉತ್ತರ ಪ್ರದೇಶ
ಜಿಲ್ಲೆ : ಲಖಿಂಪುರ್ ಖೇರಿ
ಬ್ಲಾಕ್ : ನಿಘಾಸನ್
ಗ್ರಾಮ : ನಿಘಾಸನ್
ಸ್ವ-ಸಹಾಯ ಗುಂಪು : ಜ್ಯೋತಿ ಪ್ರೇರಣಾ ಸ್ವಸಹಾಯ ಗುಂಪು
ಜೀವನೋಪಾಯ ಚಟುವಟಿಕೆಗಳು : ಕೃಷಿ-ಉದ್ಯಮಶೀಲತೆ
ಲಖ್ಪತಿ ದೀದಿ ಜರ್ನಿ :
ಮೀರಾ ದೇವಿ ಉತ್ತರ ಪ್ರದೇಶದ ನಿಘಾಸನ್ ಗ್ರಾಮದ ಕೃಷಿ-ಉದ್ಯಮಿ. ಸೀಮಿತ ಕೃಷಿ ಭೂಮಿ ಮತ್ತು ಕೆಲಸದ ಹುಡುಕಾಟದಲ್ಲಿ ಪತಿ ಮನೆಯಿಂದ ದೂರವಿದ್ದ ಕಾರಣ ಅವರ ಕುಟುಂಬವು ಆರ್ಥಿಕ ಸವಾಲುಗಳನ್ನು ಎದುರಿಸಿತು. ಆದಾಗ್ಯೂ, ಸ್ವಸಹಾಯ ಗುಂಪಿನ ಸಹಾಯ ಮತ್ತು ಅವರ ಸ್ವಂತ ಛಲ ಮತ್ತು ದೃಢ ಸಂಕಲ್ಪದಿಂದ, ಮೀರಾ ಅವರು ತಮ್ಮ ಕುಟುಂಬವನ್ನು ಪೋಷಿಸುವುದಲ್ಲದೆ, ಕೃಷಿ-ಉದ್ಯಮಿಯಾಗುವ ತಮ್ಮ ಕನಸನ್ನು ಬೆನ್ನಟ್ಟಿದರು. ಅವರು ಕೃಷಿ-ಉದ್ಯಮಿ (AE) ತರಬೇತಿಯನ್ನು ಪೂರ್ಣಗೊಳಿಸಿದರು ಮತ್ತು ಜಾನುವಾರು ಆಹಾರವನ್ನು ಮಾರಾಟ ಮಾಡುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು, ಸಾವಯವ ಗೊಬ್ಬರಗಳು ಮತ್ತು ಕೀಟನಾಶಕಗಳಿಗಾಗಿ 'ದೇಹತ್' ಮತ್ತು 'ಬಯೋವೆಲ್' ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡರು. ಅವರು ಸಿಂಪಿ ಅಣಬೆ ಕೃಷಿಯಂತಹ ಸುಧಾರಿತ ಕೃಷಿ ತಂತ್ರಗಳ ಮೂಲಕ ಮತ್ತು ಬಟನ್ ಅಣಬೆ ಕೃಷಿಯನ್ನು ಉತ್ತೇಜಿಸುವ ಮೂಲಕ ತಮ್ಮ ಆದಾಯವನ್ನು ವೈವಿಧ್ಯಗೊಳಿಸಿದರು.
ಮೀರಾ ಅವರು ತಮ್ಮ ಮನೆಯಲ್ಲಿ ಬಟನ್ ಅಣಬೆ ಪ್ರಾತ್ಯಕ್ಷಿಕೆ ಘಟಕವನ್ನು ಸ್ಥಾಪಿಸಿದ್ದಾರೆ, ಇತರ ಮಹಿಳೆಯರಿಗೆ ಅಣಬೆ ಕೃಷಿ ತಂತ್ರಗಳನ್ನು ಕಲಿಯಲು ತರಬೇತಿ ನೀಡುತ್ತಿದ್ದಾರೆ ಮತ್ತು ಅವರನ್ನು ಸಬಲೀಕರಣಗೊಳಿಸುತ್ತಿದ್ದಾರೆ. ತಮ್ಮ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸುವ ಮೂಲಕ, ಅವರು ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡಿದ್ದಾರೆ. ಅವರು ಈಗ ತಿಂಗಳಿಗೆ 18,000 ರೂ. ಗಳಿಸುತ್ತಿದ್ದಾರೆ.
ಮೀರಾ ಅವರು ಅಣಬೆ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಮೂಲಕ ಮತ್ತು ತಮ್ಮ ಉತ್ಪನ್ನಗಳಿಗೆ ಬ್ರ್ಯಾಂಡ್ ರಚಿಸುವ ಮೂಲಕ ತಮ್ಮ ವ್ಯವಹಾರವನ್ನು ವಿಸ್ತರಿಸಲು ಯೋಜಿಸಿದ್ದಾರೆ. ಸುಸ್ಥಿರ ಕೃಷಿ ಪದ್ಧತಿಗಳನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ಜಾಲವನ್ನು (network) ರಚಿಸಲು ಇತರ ಕೃಷಿ-ಉದ್ಯಮಿಗಳೊಂದಿಗೆ ಸಹಕರಿಸುವ ಗುರಿಯನ್ನು ಅವರು ಹೊಂದಿದ್ದಾರೆ.